ಬೆಂಗಳೂರು, ಮೇ. 13 : ಹೊಟ್ಟೆನೋವಿನಿಂದ ಬಂದ ಮಹಿಳೆಗೆ ಚಿಕಿತ್ಸೆ ನೀಡದೆ ನಿರಾಕರಿಸಿದ್ದ, ವೈದ್ಯರು ಪ್ರಾಣ ಬಟ್ಟ ಮಹಿಳೆ ಕೊರೊನಾ ವೈರಸ್ ಸೋಂಕು ಇರಲಿಲ್ಲ ಎನ್ನುವುದು ದೃಢಪಟ್ಟಿದೆ.
ಬೈರಸಂದ್ರದ 42 ವರ್ಷದ ಮಹಿಳೆ ಸತ್ಯಮ್ಮ ಮೃತಪಟ್ಟವರು, ಇವರಿಗೆ ತೀವ್ರ ಹೊಟ್ಟೆ ನೋವು ಬಂದಿದ್ದರಿಂದ ಆ್ಯಂಬುಲೆನ್ಸ್ ನಲ್ಲಿ ಜಯನಗರದ ಮೂರನೇ ಹಂತದಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷೆಗೆ ಮುನ್ನವೇ ಕೊರೊನಾ ಸೋಂಕು ಇರಬಹುದು ಎಂದು ಶಂಕಿಸಿದ ವೈದ್ಯರು ಮತ್ತು ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು.
ಕೊರೊನಾ ವರದಿಗೆ ಕಾದರು ಮಹಿಳೆ ಒದ್ದಾಡುತ್ತಿದ್ದ ರೀತಿಯಿಂದಲೇ ಆಸ್ಪತ್ರೆ ವೈದ್ಯರು ಆಕೆಗೆ ಕೊರೊನಾ ಸೋಂಕು ಇರಬಹುದು ಎಂದು ಶಂಕಿಸಿದ್ದರು. ಈ ಕಾರಣಕ್ಕೆ ಮಹಿಳೆಯ ಗಂಟಲ ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಿ ಕೊರೊನಾ ಪರೀಕ್ಷೆಗೆಂದು ನಿಗಧಿತ ಆಸ್ಪತ್ರೆಗೆ ರವಾನಿಸಿದ್ದರು. ವರದಿ ಬರುವವರೆಗೂ ಮೃತದೇಹ ಕೊಡುವುದಿಲ್ಲ ಎಂದಿದ್ದರು. ಮಂಗಳವಾರ ಮಧ್ಯಾಹ್ನ ವರದಿ ಬಂದಿದ್ದು, ಸೋಂಕು ಇರಲಿಲ್ಲ ಎನ್ನುವುದು ದೃಢಪಟ್ಟಿದೆ.