ಅಯ್ಯೋ ಪಾಪಿ ಪತಿ

  • In Crime
  • July 1, 2020
  • 205 Views
ಅಯ್ಯೋ ಪಾಪಿ ಪತಿ

ಬೆಂಗಳೂರು,ಜು.1 : ಪತ್ನಿಯನ್ನು ನಡುರಸ್ತೆಯಲ್ಲಿ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿ ಪತಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಲಗ್ಗೆರೆಯ ಲವಕುಶ ನಗರದ ವಾಸಿ ಮಂಜುನಾಥ್ ಬಂಧಿತ ಆರೋಪಿ.

ಮೂಲತಃ ಚನ್ನರಾಯಪಟ್ಟಣದವನಾದ ಈತ ಟೆಂಪೊ ಚಾಲಕನಾಗಿದ್ದಾನೆ. ಕೊಲೆಯಾದ ಹೇಮಾ(33) ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದರು. ಹೇಮಾ ಮತ್ತು ಮಂಜುನಾಥ್ 12 ವರ್ಷಗಳ ಹಿಂದೆ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಇವರ ಸಂಸಾರದಲ್ಲಿ  ಭಿನ್ನಾಭಿಪ್ರಾಯ ಉಂಟಾಗಿ ಆಗಾಗ ಜಗಳ ನಡೆಯುತ್ತಿತ್ತು. ಪತಿ-ಪತ್ನಿ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಹೇಮಾ ಕೋಪಗೊಂಡು ಪೊಲೀಸ್  ಠಾಣೆಗೆ ಹೋಗುತ್ತೇನೆಂದು ಹೇಳಿ ಮನೆಗೆ ಬೀಗ ಹಾಕಿ ಹೊರಬಂದಿದ್ದಾರೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos