ನವದೆಹಲಿ, ನ್ಯೂಸ್
ಎಕ್ಸ್ ಪ್ರೆಸ್, ಫೆ.26: ಭಾರತೀಯ
ವಾಯು ಸೇನೆಯ(ಐಎಎಫ್) 12 ಮಿರಾಜ್-2000
ಯುದ್ಧ ವಿಮಾನಗಳು ಮಂಗಳವಾರ ಬೆಳಗಿನ ಸಮಯದಲ್ಲಿ ಪಾಕಿಸ್ತಾನದ ಬಾಲಾಕೋಟ್ ಮೇಲೆ
1,000 ಕೆಜಿ ಬಾಂಬ್ ಗಳನ್ನು ಸುರಿದ ಪರಿಣಾಮ ಸುಮಾರು
200 ಉಗ್ರರು ಹತರಾಗಿದ್ದಾರೆ ಎಂದು ಸರಕಾರಿ ಮೂಲಗಳು
ತಿಳಿಸಿವೆ.
ಪಾಕ್ ಮೂಲದ ಜೆಇಎಂ ಉಗ್ರ
ಸಂಘಟನೆ ಮತ್ತೊಂದು ಆತ್ಮಾಹುತಿ ದಾಳಿಗೆ ಪ್ರಯತ್ನಿಸುತ್ತಿದೆ ಎಂಬ
ಗುಪ್ತಚರ ಮೂಲಗಳ ಮಾಹಿತಿಯ ಮೇರೆಗೆ
ಐಎಎಫ್ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು
ಧ್ವಂಸಗೊಳಿಸಿದೆ. ದಾಳಿಯಲ್ಲಿ ಮಸೂದ್ ಅಝರ್ನ ಭಾವ
ವೌಲಾನ ಯೂಸುಫ್ ಅಝರ್ ಹತ್ಯೆಯಾಗಿದ್ದಾನೆಂದು
ವರದಿಯಾಗಿದೆ.
1971ರ ಯುದ್ದದ ಬಳಿಕ ಇದೇ
ಮೊದಲ ಬಾರಿ ಭಾರತೀಯ ವಾಯು
ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿ
ಏರ್ ಸ್ಟ್ರೈಕ್ ನಡೆಸಿದೆ.
ಇಂದು ಸರ್ವಪಕ್ಷ ಸಭೆ:
ಪಾಕ್ ನೊಳಗೆ ಐಎಎಫ್ ದಾಳಿ ನಡೆಸಿದ್ದನ್ನು
ಪಕ್ಷಬೇಧ ಮರೆತು ಎಲ್ಲರೂ ಅಭಿನಂದನೆ
ಸಲ್ಲಿಸಿದ್ದು, ವಿದೇಶಾಂಗ ಖಾತೆ ಸಚಿವೆ ಸುಶ್ಮಾ
ಸ್ವರಾಜ್ ಮಂಗಳವಾರ ಸರ್ವಪಕ್ಷ ಸಭೆ
ಕರೆದಿದ್ದಾರೆ.