ಅಪಘಾತ: ಯುವಕ ಸಾವು

ಅಪಘಾತ: ಯುವಕ ಸಾವು

ಹುಬ್ಬಳ್ಳಿ, ನ. 22 : ಬೈಕ್ ಸ್ಕೀಡ್ ಆಗಿ ಸ್ಥಳದಲ್ಲೇ ವ್ಯಕ್ತಿ ಓರ್ವ ಮೃತಪಟ್ಟು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಗರದ ಹೊರವಲಯದ ಕುಂದಗೋಳ ಕ್ರಾಸ್ ಎನ್ ಹೆಚ್-4 ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಬೊಮ್ಮಸಮುದ್ರದ ನಿವಾಸಿ ಪೀರಪ್ಪ ಓಜ್ಜನವರ (26) ಮೃತಪಟ್ಟವನಾಗಿದ್ದು, ಈತ ಪ್ರತಿನಿತ್ಯ ಜಿಮ್ ಮಾಡಲು ನಗರಕ್ಕೆ ಆಗಮಿಸುತ್ತಿದ್ದ, ಅದೇ ರೀತಿ ಇಂದು ಕೂಡಾ ಸ್ನೇಹಿತ ಮಂಜುನಾಥ ಹರಿಜನ ನೊಂದಿಗೆ ಬೈಕ್ ಮೇಲೆ ಬರುವಾಗ ಕುಂದಗೋಳ ಕ್ರಾಸ್ ಹತ್ತಿರ ಬೈಕ್ ಸ್ಕೀಡ್ ಆಗಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಪೀರಪ್ಪನ ತಲೆಗೆ ಹೊಡೆತ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಮಂಜುನಾಥ ಹರಿಜನ (27) ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಗ್ರಾಮೀಣ ಪೋಲಿಸ ಠಾಣೆ ಪಿಐ ಜಯಂತ ಗೌಳಿ, ಪಿಎಸ್ ಐ ಮಂಜುಳಾ ಚಗರಿ, ಎಎಚ್ ಇ ಆರ್.ಎಮ್ .ಶಂಕಿನದಸರ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos