ಒಟ್ಟು 29 ಸ್ತಬ್ದಚಿತ್ರಗಳು, ಅದರಲ್ಲಿವೆ ಸರ್ಕಾರದ ಸಾಧನೆಗಳು.
ಮೈಸೂರು, ಅ. 5: ಮೈಸೂರಿನ ವಿಶ್ವವಿಖ್ಯಾತ ನಾಡಹಬ್ಬ ದಸರೆಯ ಅಂಗವಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ವಿವಿಧ ಇಲಾಖೆಗಳಿಂದ 39 ಸ್ಥಬ್ಧಚಿತ್ರಗಳು ಆರಿಸಲ್ಪಟ್ಟಿವೆ. ಜಂಬೂ ಸವಾರಿಯಲ್ಲಿ ಈ ಸ್ಥಬ್ದಚಿತ್ರಗಳೂ ಕೂಡ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿದ್ದು ಪ್ರತಿಯೊಂದು ಜಿಲ್ಲೆಯ ಪರಂಪರೆ ಹಾಗೂ ವೈವಿಧ್ಯತೆ ಅನಾವರಣಗೊಳಿಸುವ ಚಿತ್ರಗಳೊಡನೆ ಈ ಬಾರಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟೂ 39 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ.
ವಿಶೇಷವಾಗಿ ಈ ಬಾರಿ ಐತಿಹಾಸಿಕ ಹಿನ್ನಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ, ಪರಿಸರ, ಅರಣ್ಯೀಕರಣ, ಅಂತರ್ಜಲ, ನೆರೆ-ಬರ, ಚಂದ್ರಯಾನ, ಸಂವಿಧಾನ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ಬಿಂಬಿಸುವ ಸ್ಥಬ್ಧಚಿತ್ರಗಳು ನಗರದ ಎ.ಪಿ.ಎಂ.ಸಿ ಆವರಣದಲ್ಲಿ ಸ್ಥಬ್ಧ ಚಿತ್ರಗಳು ಸಿದ್ಧಗೊಳ್ಳುತ್ತಿದ್ದು ಬಂದಂತಹ ಕಲಾವಿದರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ, ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ.
ಜಿಲ್ಲಾವಾರು ಸ್ಥಬ್ಧಚಿತ್ರಗಳ ಮಾಹಿತಿ ಇಂತಿದೆ
- 1. ಬೆಳಗಾಂ- ಪ್ರವಾಹದಿಂದ ನಲುಗಿದ ಬೆಳಗಾವಿ, 2.ಬಾಗಲಕೋಟೆ-ಅತಿವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು
- 3. ಧಾರವಾಡ-ಸಾಂಸ್ಕೃತಿಕ ವೈಭವ,
4.ಹಾವೇರಿ-ಶಂಖನಾದ ಮೊಳಗಿಸುತ್ತಿರುವ ಕನಕದಾಸರು
- 5. ಗದಗ- ಭೇಟಿ ಪಡವೋ ಭೇಟಿ ಬಚಾವೋ
- 6. ಉತ್ತರ ಕನ್ನಡ-ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ
- 7. ವಿಜಯಪುರ-ವಚನ ಪಿತಾಮಹ ಫ.ಹು ಹಳಕಟ್ಟಿ
- 8. ಬೆಂಗಳೂರು ನಗರ-ಚಂದ್ರಯಾನ-2
- 9. ಬೆಂಗಳೂರು ಗ್ರಾಮಾಂತರ-ಸ್ವಚ್ಛತ ಕಡೆಗೆ ನಮ್ಮ ನಡಿಗೆ
- 10. ಚಿತ್ರದುರ್ಗಾ-ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು
- 11. ದಾವಣಗೆರೆ-ಏರ್ ಸ್ಟ್ರೈಕ್
- 12. ಕೋಲಾರ-ಅಂತರಗಂಗೆ
- 13. ಶಿವಮೊಗ್ಗ-ಫಿಟ್ ಇಂಡಿಯಾ
14: ತುಮಕೂರು-ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು
15: ರಾಮನಗರ-ಮಳೂರು ಅಂಬೆಗಾಲು ಕೃಷ್ಣ
16: ಚಿಕ್ಕಬಳ್ಳಾಪುರ-ರೇಷ್ಮೆ ಮತ್ತು ಹೆಚ್ ನರಸಿಂಹಯ್ಯ
17: ಗುಲ್ಬರ್ಗಾ-ಆಯುಷ್ಮಾನ್ ಭಾರತ್
18:ಬಳ್ಳಾರಿ-ಹಂಪಿ ವಾಸ್ತುಶಿಲ್ಪ ಕಲಾ ವೈಭವ
19: ಬೀದರ್-ಫಸಲ್ ಭೀಮಾ ಯೋಜನೆ
20: ಕೊಪ್ಪಳ-ಗವಿಸಿದ್ದೇಶ್ವರ ಬೆಟ್ಟ
21: ರಾಯಚೂರು-ಗೂಗಲ್ ಬ್ರಿಡ್ಜ್, ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾ ಯೋಜನೆ
22: ಯಾದಗಿರಿ-ಅಂಬಿಗರ ಚೌಡಯ್ಯ,
23: ಮೈಸೂರು-ಚಾಮರಾಜ ಒಡೆಯರ್ ಅವರ 100 ನೇ ವರ್ಷದ ಸಾಧನೆ,
24: ಚಾಮರಾಜನಗರ-ಸಮೃದ್ದಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ,
25: ಚಿಕ್ಕಮಗಳೂರು-ಶಿಶಿಲಬೆಟ್ಟ,
26; ದಕ್ಷಿಣ ಕನ್ನಡ-ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ,
27; ಹಾಸನ-ಎತ್ತಿನಹೊಳೆ ಯೋಜನೆ,
28 : ಕೊಡಗು-ಗುಡ್ಡ ಕುಸಿತ ಜಾಗೃತಿ ಮೂಡಿಸುವ ಬಗ್ಗೆ,
29: ಮಂಡ್ಯ-ಶ್ರೀ ಆದಿ ಚುಂಚನಗಿರಿ ಮಠ,
30: ಉಡುಪಿ : ಕೃಷ್ಣ ಮಠದ ಗೋಪುರ,
31: ದಸರಾ ಉಪ ಸಮಿತಿ-ಆನೆ ಬಂಡಿ,
32: ಜೆ.ಎಸ್.ಎಸ್ ಮಠ,
33: ವಾರ್ತಾ ಇಲಾಖೆ-ಸರ್ಕಾರ ಸೌಲಭ್ಯಗಳ ಮಾಹಿತಿ
34: ದಸರಾ ಉಪ ಸಮಿತಿ-ಮೆಮೊರೈಲ್, ಉಡಾನ್ ಹಾಗೂ ಹತ್ತು ಪಥದ ರಸ್ತೆ,
35: ಜಿಲ್ಲಾಡಳಿತ : ಸಾಮಾಜಿಕ ನ್ಯಾಯ,
36: ಕಾವೇರಿ ನೀರಾವರಿ ನಿಗಮ-ನೀರಾವರಿ ನಿಗಮ ಮಾಹಿತಿ,
37: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ,
38: ಪ್ರವಾಸೋದ್ಯಮ ಇಲಾಖೆ-ನಿಮ್ಮ ಸಾಹಸಗಾಥೆ ನೀವೇ ರಚಿಸಿ,
39: ಮೈಸೂರು ವಿಶ್ವವಿದ್ಯಾನಿಲಯ-ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು.