ಸಹಾಯಧನದ ನಿರೀಕ್ಷೆಯಲ್ಲಿ ವಿಶೇಷ ಚೇತನ ವ್ಯಕ್ತಿ

ಸಹಾಯಧನದ ನಿರೀಕ್ಷೆಯಲ್ಲಿ ವಿಶೇಷ ಚೇತನ ವ್ಯಕ್ತಿ

ಪಾವಗಡ: ಗಡಿನಾಡು ಪಾವಗಡ ತಾಲ್ಲೂಕಿನ ಯರ್ರಮ್ಮನಹಳ್ಳಿ ಗ್ರಾಮದ ಮುತ್ಯಾಲಪ್ಪ ಎಂಬ ವ್ಯಕ್ತಿ ದೃಷ್ಟಿ ದೋಷದಿಂದ ಬಳಲುತ್ತಿದ್ದು ಈತ ಹತ್ತನೇ ತರಗತಿಯವರೆಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿದ್ಯಾಬ್ಯಾಸ ಮುಂದುವರೆಸಿದ್ದರು.
ನಂತರ ಕಡುಬಡತನದಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ನಂತರ ಹಾಗೆಯೇ ಕಾಲ ಕಳೆಯುತ್ತಿದ್ದ ಇವರು ಟಿ.ವಿ ರೇಡಿಯೋಗಳಲ್ಲಿ ಹಾಡುಗಳನ್ನು ಕೇಳಿ ಕಲಿತು ಹಾಡುಗಳನ್ನು ಅಭ್ಯಾಸ ಮಾಡಿಸಿದ್ದಾರೆ. ಉತ್ತಮ ಕಂಠವನ್ನು ಹೊಂದಿರುವ ಇವರು ಹಾಡುಗಳನ್ನು ಹಾಡಿ ಅದರಿಂದ ಬರುವ ಸಣ್ಣ ಪುಟ್ಟ ಆದಾಯದಿಂದ ಜೀವನ ಕಳೆಯುತ್ತಿದ್ದಾರೆ. ಮಾಸಿಕ ವೇತನ ಬಿಟ್ಟು ಬೇರೆ ಯಾವುದೇ ಇಲಾಖೆಯಿಂದ ಸಹಾಯಧನ ಪಡೆದಿರುವುದಿಲ್ಲ.
ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಉತ್ತಮ ಹಾಡುಗಾರ ಎಂದು ಹೆಸರು ಪಡೆದಿರುವ ಇವರು ಈಗಲಾದರೂ ಸರ್ಕಾರ ನನಗೆ ಸಹಾಯಧನವನ್ನು ಒದಗಿಸಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos