ಬಾಲಕ ಚಿರತೆಗೆ ಬಲಿ

ಬಾಲಕ ಚಿರತೆಗೆ ಬಲಿ

ತುಮಕೂರು, ಜ. 10 : ತುಮಕೂರಿನಲ್ಲಿ ಚಿರತೆಗಳ ಹಾವಳಿ ದಿನೇ ದಿನೆ ಹೆಚ್ಚಾಗತ್ತಲೇ ಇದೆ. ಅಂಥದ್ದೇ ಮತ್ತೊಂದು ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು, 5 ವರ್ಷದ ಪುಟ್ಟ ಬಾಲಕ ಚಿರತೆಗೆ ಬಲಿಯಾಗಿದ್ದಾನೆ.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಗುರುವಾರ ಸಮರ್ಥ್ ಗೌಡ (4) ಚಿರತೆ ದಾಳಿಗೆ ಬಲಿ ಆಗಿದ್ದಾನೆ.
ಸಮರ್ಥ್ ತನ್ನ ಅಜ್ಜಿಯ ಜತೆ ಹಸುವನ್ನು ಮೇಯಿಸಲು ಗ್ರಾಮದ ಹೊರವಲಯದ ತೋಪಿಗೆ ಹೋಗಿದ್ದ. ಸಂಜೆ ಮನೆಗೆ ಮರಳುವಾಗ ಹಸುಗಳನ್ನು ಹಿಡಿದುಕೊಂಡು ಅಜ್ಜಿ ಮುಂದೆ ಸಾಗಿದ್ದಾರೆ. ಸಮರ್ಥ್ ಆಟ ಆಡುತ್ತ ನಿಧಾನವಾಗಿ ಬರುತ್ತಿದ್ದ ವೇಳೆ ಚಿರತೆ ಹಿಂಬದಿಯಿಂದ ದಾಳಿ ನಡೆಸಿದೆ. ನೂರು ಮೀಟರ್ ದೂರ ಬಾಲಕನನ್ನು ಎಳೆದುಕೊಂಡು ಹೋಗಿದೆ.

ಫ್ರೆಶ್ ನ್ಯೂಸ್

Latest Posts

Featured Videos