6ನೇ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಕಬಡ್ಡಿಯಲ್ಲಿ ಪ್ರಥಮ ಸ್ಥಾನ

6ನೇ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಕಬಡ್ಡಿಯಲ್ಲಿ ಪ್ರಥಮ ಸ್ಥಾನ

ಕೆ.ಆರ್.ಪುರ, ಜ. 07: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಡೆದ 6ನೇ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಕಬಡ್ಡಿ  ಪಂದ್ಯಾವಳಿಯಲ್ಲಿ ಕೆ.ಆರ್.ಪುರ ವಿಜಯಾ ಕಾಲೇಜ್ ವಿದ್ಯಾರ್ಥಿ ಸುಹಾಸ್ ನಾಯಕ್ ಬಿ.ಯು ನಾಯಕತ್ವದ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.

ತಂಡದ ನಾಯಕನಾಗಿ ಉಮಾಶಂಕರ್ ಅವರ ಪುತ್ರ ಬಿ.ಯು.ಸುಹಾಸ್ ನಾಯಕ್ ಅವರ ನೇತೃತ್ವದ ತಂಡ ರಾಜ್ಯಕ್ಕೆ ಕೀರ್ತಿ ತಂದಿರುವುದು ಎಲ್ಲೆಡೆ ಹರ್ಷ ವ್ಯಕ್ತವಾಗಿದೆ. ಕಳೆದವಾರ ನಡೆದ ಪಂದ್ಯಾವಳಿಯಲ್ಲಿ ಅಮೆಚೂರ್ ಅಸೋಷಿಯೇಷನ್ ಪರವಾಗಿ ಸುಹಾಸ್ ನಾಯಕ್ ತಂಡ ಭಾಗಿಯಾಗಿದ್ದರು, ಅವರ ಪ್ರದರ್ಶನ ಅತ್ಯುತ್ತಮ ವಾಗಿದ್ದು ಪ್ರಶಸ್ತಿಗೆ ಮುತ್ತಿಟ್ಟಿದೆ.

ಕರ್ನಾಟಕದಿಂದ ಹತ್ತು ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಜಯಾ ಕಾಲೇಜಿನ ವಿಧ್ಯಾರ್ಥಿ ಸುಹಾಸ್ ನಾಯಕ್ ಬಿ.ಯು ಸೇರಿದಂತೆ ಇಬ್ಬರು ವಿದ್ಯಾರ್ಥಿಗಳು ಸುರಾನಾ ಕಾಲೇಜಿನಿಂದ ಪ್ರತಿನಿಧಿಸಿದ್ದರು.

ಯೂತ್ ಏಷಿಯನ್ ಗೇಮ್ಸ್ ಫೆಡರೇಷನ್ ಆಯೋಜನೆ ಮಾಡಲಾಗಿದ್ದ ಈ ಪಂದ್ಯಾವಳಿಯಲ್ಲಿ ಭಾರತದ ಅನೇಕ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗಿಯಾಗಿದ್ದರು. 21 ವರ್ಷದ ಒಳಗಿನ ವಿಭಾಗದಲ್ಲಿ ಕರ್ನಾಟಕದ ತಂಡಕ್ಕೆ ಪ್ರಥಮ ಬಹುಮಾನ ಬಂದಿದ್ದು ವಿಶೇಷ. ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ. ಇದರಿಂದ ನನಗೆ ಉತ್ಸಾಹ ಹೆಚ್ಚಿಸಿದೆ ಎಂದು ಸುಹಾಸ್ ನಾಯಕ್ ಹರ್ಷ ವ್ಯಕ್ತಪಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos