ಮಂಗಳೂರು, ಮೇ. 13 : ಕೊರೋನಾ ಬಂದಿರುವ ಹಿನ್ನಲೆ ಒಟ್ಟು 176 ಸಂಕಷ್ಟಕ್ಕೆ ಸಿಲಿಕಿದ್ದಾರೆ. ದುಬೈಯಿಂದ ಆಗಮಿಸಿದ ಒಟ್ಟು ಪ್ರಯಾಣಿಕರಲ್ಲಿ 95 ಪುರುಷರು ಹಾಗೂ 81 ಮಹಿಳೆಯಿಂದರು ಗರಿಷ್ಠ ಪ್ರಮಾಣದಲ್ಲ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸೇರಿದವರು.
ಬೆಂಗಳೂರು, ಉತ್ತರ ಕನ್ನಡ, ಕೊಡಗು ಸೇರಿದ್ದಂತೆ ಮುಂತಾದ ಇತರ ಜಿಲ್ಲೆಗಳಿಗೆ ಸೇರಿದ ಪ್ರಯಾಣಿಕರು ಕೂಡ ಇದ್ದರು. ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ 96 ಮಂದಿ, ಉಡುಪಿ ಜಿಲ್ಲೆಗೆ ಸೇರಿದ 49 ಮಂದಿ ಹಾಗೂ ಇತರ ಜಿಲ್ಲೆಗಳಿಗೆ ಸೇರಿದ 31 ಮಂದಿ ಇದ್ದರು. ಐಎಎಸ್ ಪ್ರೊಬೇಷನರಿ ಅಧಿಕಾರಿ ಹಾಗೂ ಉಸ್ತುವಾರಿ ರಾಹುಲ್ ಶಿಂಧೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.