ಮಂಡ್ಯ: ನಾನು ಲೋಕಸಭೆಗೆ ಸ್ಪರ್ಧೆ ಮಾಡುವ ನಿರ್ಧಾರ ಮಾಡಬೇಕಿರುವುದು ನಮ್ಮ ಪಕ್ಷದ ವರಿಷ್ಠರು ಎಂದು
ಪರೋಕ್ಷವಾಗಿ ಮಂಡ್ಯ ಲೋಕಸಭೆಗೆ ಸ್ಪರ್ಧೆ ಮಾಡುವ ಸುಳಿವು ನೀಡಿದ ನಿಖಿಲ್ ಕುಮಾರಸ್ವಾಮಿ
ಮಂಡ್ಯದ ಮದ್ದೂರಿನಲ್ಲಿ ಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಲೋಕಸಭಾ ಸ್ಪರ್ಧೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆಯ 8 ಕ್ಷೇತ್ರದ ಶಾಸಕರ ತೀರ್ಮಾನಕ್ಕೆ ನಾನು ಬಧ್ದವಾಗಿರುತ್ತೇನೆ.
ನಾನು ಚಿತ್ರನಟನಾಗಿದ್ರು ನನಗೆ ದೊಡ್ಡ ಜವಬ್ದಾರಿ ಇದೆ. ನಮ್ಮ ತಂದೆ ಅವ್ರ ಜೊತೆ ಹಲಬಾರಿ ರಾಜ್ಯದ ವಿಷಯ ಗಳ ಬಗ್ಗೆ ಚರ್ಚೆ ಮಾಡ್ತೇನೆ. ನಾವು ಇರೋದು ಸಮ್ಮಿಶ್ರ ಸರ್ಕಾರದಲ್ಲಿ. ಕುಮಾರಣ್ಣ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನ ಮಾಡ್ತಿದ್ದಾರೆ.
ರೈತರ ಸಂಪೂರ್ಣ ಸಾಲಮನ್ನಾ ಆಗ್ಬೇಕು ಅನ್ನೋ ನಿಟ್ಟಿನಲ್ಲಿ ನಮ್ಮ ತಂದೆ ಕೆಲಸ ಮಾಡ್ತಿದ್ದಾರೆ. ನಾನು ರಾಜಕಾರಣಕ್ಕೆ ನನ್ನ ಸ್ವಾರ್ಥಕ್ಕೊಸ್ಕರ ಬರೋದಾದ್ರೆ ನನಗೆ ರಾಜಕಾರಣ ಬೇಡ. ಇದು ನನಗೆ ನಾನೇ ಹಾಕಿಕೊಳ್ಳುವ ಪ್ರಶ್ನೆ. ನಾನು ಇವಾಗ ತಾನೇ ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಿದ್ದೇನೆ. ನನ್ನ ತಂದೆಗೆ ಚಿತ್ರರಂಗದ ಮೇಲೆ ತುಂಬಾ ಒಲವಿದೆ. ಸೀತಾರಾಮ ಕಲ್ಯಾಣದಲ್ಲಿನ ನನ್ನ ನಟನೆ ನೋಡಿ. ನನ್ನನ್ನು ರಾಜಕೀಯ ಹಾದಿ ತುಳಿಸಿ ನನ್ನಲ್ಲಿನ ಪ್ರತಿಭೆಯನ್ನ ಡಿಸ್ಟರ್ಬ್ ಮಾಡ್ಬೇಕಾ ಅನ್ನೋ ಭಾವನೆ ನನ್ನ ತಂದೆಗೆ ಇದೆ ಎಂದಿದ್ದಾರೆ.