ನೆಲಮಂಗಲ: ಸಂಸ್ಥೆಯ ಮಾಲೀಕ ಸಿದ್ಧಾರ್ಥ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ತಾಲೂಕಿನ ಹೊಸನಿಜಗಲ್ ಬಳಿ ಇರುವ ಕಾಫಿ ಡೇಗೆ ರಜೆ ನೀಡಲಾಗಿದೆ. ಉದ್ಯೊÃಗಿಗಳು ಮೌನಕ್ಕೆ ಜಾರಿದ್ದು, ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ಕಾಫಿ ಡೇಯಲ್ಲಿ ಸ್ಮಶಾನ ಮೌನ ಆವರಿಸಿದೆ.
ಸಿದ್ಧಾರ್ಥ ಅವರ ಮಂಗಳೂರು ಸಮೀಪ ಕಾಣೆಯಾಗಿದ್ದಾರೆ ಎಂಬ ಸುದ್ದಿ ಹೊರಬಂದ ಬಳಿಕ ಮಂಗಳವಾರ (ಜುಲೈ ೩೦)ರ ರಾತ್ರಿಯಿಂದಲೇ ಕಾಫಿ ಡೇಯಲ್ಲಿ ಗ್ರಾಹಕರ ಸಂಖ್ಯೆ ಇಳಿ ಮುಖವಾಗಿತ್ತು. ಬುಧವಾರ ಹೊಸನಿಜಗಲ್ ಬಳಿಯ ಔಟ್ಲೆಟ್ಗೆ ರಜೆಯನ್ನು ನೀಡಲಾಗಿತ್ತು.
ಇದರ ನಡುವೆಯೇ ಬುಧವಾರ ಮುಂಜಾನೆ ಮಾಲೀಕರ ನಿಧನವಾರ್ತೆ ತಿಳಿದ ಸಿಬ್ಬಂದಿಗಳೂ ರೋದಿಸುತ್ತಿದ್ದರು. ನಮ್ಮ ಮಾಲೀಕ ಸಿದ್ಧಾರ್ಥರ ಸಾವಿನ ಹಿಂದಿನ ರಹಸ್ಯ ಬಯಲು ಮಾಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.
ಮುಂದೆ ನಮಗೆಲ್ಲ ಯಾರು ದಿಕ್ಕು ಎಂಬುದು ಅವರನ್ನು ಕಾಡುತ್ತಿರುವ ಪ್ರಶ್ನೆಯಾಗಿದ್ದು, ಎಲ್ಲರೂ ನೋವಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಜೊತೆಯಲ್ಲಿ ಮೂಡಿಗೆರೆಯಲ್ಲಿ ನಡೆಯುವ ಸಿದ್ಧಾರ್ಥರ ಅಂತಿಮ ಸಂಸ್ಕಾರಕ್ಕೆ ನಾವೆಲ್ಲ ತೆರಳುತ್ತೆÃವೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.